Sunday, March 31, 2013

ಹೀಗೊಂದು ಸಂಭಾಷಣೆ



ಹೀಗೊಂದು ಸಂಭಾಷಣೆ: 

ಅಶೋಕ:  ಏನು ತಿಳಿಯದಿರ್ದಡೆಯೂ ಅಹುದಹುದೆನ್ನುವವರ ಕಂಡು ಮೆಚ್ಚ
ಏನು ತಿಳಿಯದಿರ್ದಡೆಯೂ ಅಹುದಹುದೆನ್ನುವವರ ಕಂಡು ಮೆಚ್ಚುವವರನೂ ಮೆಚ್ಚ ನಮ್ಮ ಕೂಡಲಸಂಗಮದೇವ

ಪ್ರಜ್ಞಾ:    ಏನು ತಿಳಿಯದಿರ್ದಡೆಯೂ ಅಹುದಹುದೆನ್ನುವವರ ಕಂಡು ಮೆಚ್ಚದವರ, 
ಏನು ತಿಳಿಯದಿರ್ದಡೆಯೂ  ಅಹುದಹುದೆನ್ನುವವರ ಕಂಡು ಮೆಚ್ಚದವರ ಕಿಚ್ಚು ಸೂರ ಸುಟ್ಟಿದ್ದು ಕಂಡು ಮರುಗಿದೆನೋ ಚೆನ್ನ ಮಲ್ಲಿಕಾರ್ಜುನ 

ಷಣ್ಮುಖ: ಕಿಚ್ಚು ಹಚ್ಚಿಯೂ ಸೂರು ಸುಡದಿರಲೆಂಬ ಒಡಲ ಕಳವಳವ ಮೆಚ್ಚನಾ ಸರ್ವಜ್ಞ

ಪ್ರಜ್ಞಾ:  ಋಷಿ ಮೂಲ, ನದಿ ಮೂಲ, ಸ್ತ್ರೀ ಮೂಲ, ಮತ್ತು ಕಿಚ್ಚಿನ  ಮೂಲ ಅರಿತೆನೆಂಬವರಿಹರೆ ಜಗದಿ
ಜಗ ಮೆಚ್ಚಿದೊಡೆ ಆನಂದ ಮನ ಮೆಚ್ಚಿದೊಡೆ ಪರಮಾನಂದ ಚೆನ್ನಮಲ್ಲಿಕಾರ್ಜುನ


No comments:

Post a Comment