Tuesday, August 21, 2012

ಖಯಾಲಿಗೊಂದು ರೂಪ ಕೊಟ್ಟು ಅವನನ್ನು ಹುಡುಕುತ್ತ ಉಳಿದೆ!

ಖಯಾಲಿಗೊಂದು ರೂಪ ಕೊಟ್ಟು ಅವನನ್ನು ಹುಡುಕುತ್ತ ಉಳಿದೆ!


ಖಯಾಲಿಗೊಂದು ರೂಪ ಕೊಟ್ಟು ಅವನನ್ನು ಹುಡುಕುತ್ತ ಉಳಿದೆ!
ಆಕಾರ ತಳೆದದ್ದು ಬರಿಯ ಕಲ್ಪನೆ ಮಾತ್ರ
ಹಾರೈಕೆಗಳನ್ನು ಊದುತ್ತ ಕುಳಿತೆ ದಟ್ಟ ಹೊಗೆಯ ನಡುವೆ
ಎಲ್ಲಾದರೂ  ಜ್ವಾಲೆ ಎದ್ದರೆ ಬರಸೆಳೆದು
ನಿನ್ನ ಹೆಸರಿಡಬಹುದೆಂದು

ಪರ್ವತಸಾಲಿನ ಗುಹೆಯೊಂದರಲ್ಲಿ
ಯಾರೋ ಹೊತ್ತಿಸಿಟ್ಟಿದ್ದರು   ಬಯಕೆಯ ದಳ್ಳುರಿಯನ್ನ...
ಕಾಲದ ಮಿತಿ ಇರದೆ ಕಾಯುತ್ತ
ಗಟ್ಟಿ ಬಂಡೆಗಳ ಮೇಲೆ    ಉಪಾಸನೆಯನ್ನು ಒರೆ ಹಚ್ಚಿ
ಇನ್ನೂ ಭರವಸೆ ಇಟ್ಟುಕೊಂಡ ಅಪರಾಧಕ್ಕಾಗಿ
ಖಯಾಲಿಗೊಂದು ಬೆಚ್ಚಗಿನ ಗೂಡನ್ನೂ ಮಾಡಿಟ್ಟು...

ರಾತ್ರಿಯಿಡೀ ಉರಿದಿತ್ತು ವಿರಹದ ಅಗ್ನಿ
ಭರವಸೆ ಇನ್ನೂ ಉಳಿದಿದೆಯೆಂದರೆ ಇಷ್ಟೇ
ಒಬ್ಬ ಬಂಜೆಗಿರುವ ಬಸಿರಿನ ಬಯಕೆಯಷ್ಟೇ!!

ಗುಲ್ಜಾರರ ಕವನವೊಂದನ್ನು ಕನ್ನಡಕ್ಕಿಳಿಸುತ್ತಿದ್ದೇನೆ ಇವತ್ತು. ಅವರ Neglected Poems ನಿಂದ ಆಯ್ದುಕೊಂಡಿದ್ದು. 

ಗುಲ್ಜಾರ್ ಎಂತಹ ನವಿರು ಭಾವಗಳನ್ನಾದರೂ ಪದಗಳ ಕುಸುರಿಯಲ್ಲಿ ಹೆಣೆದಿಡಬಲ್ಲರು. ಕೋಮಲ ಭಾವಗಳು ಅಕ್ಷರಶಃ ರೂಪು ತಾಳುತ್ತವೆ, ಮನಃಪಟಲದ ಮೇಲೆ ಕತೆಯೊಂದನ್ನು ಮೂಡಿಸುತ್ತಾರೆ. ಅಂತಹ ಕುಸುರಿಕಾರನ ಸೃಷ್ಟಿಯನ್ನು ಮತ್ತೊಮ್ಮೆ  ಬೇರೆಯದೇ ಭಾಷೆಯಲ್ಲಿ ಸೃಷ್ಟಿಸುವುದು ಕಷ್ಟ. ನಾನು ಅಂತಹ ಪ್ರಯತ್ನವೊಂದನ್ನ ಮಾಡಿದ್ದೇನೆ ಅಷ್ಟೆ.






No comments:

Post a Comment