Wednesday, August 7, 2013

ಋತು ಪಲ್ಲವ





ಕಳೆದ ಬೇಸಿಗೆಯಲ್ಲಿ
ಬಿರಿದ ಭೂಮಿಯ ಬಾಯೊಳಗಿಂದ ಹಾದು
ಕರುಳ ತಂತುಗಳನ್ನ ಸುಟ್ಟು
ಅಂತರ್ಜಲದ ಬಿರಡೆ ಮುಚ್ಚಿ
ದಾಹದ ಹಸಿವಿಗೆ ಕಿಚ್ಚಿಟ್ಟ ರಣ ಬಿಸಿಲಿಗೆ
ಸೂತಕದ ಛಾಯೆಯಿತ್ತು.

ಸಾವಿನ ಮನೆಯಲ್ಲಿ ನಗುವ ಕಂದನ ಕೇಕೆಯಂತೆ
ಸುರಿದ ಮಳೆ ಕೆರೆ ಕೊಳ್ಳ ಕೋಡಿ ಹರಿದು
ಕರುಳ ತಂತುಗಳನ್ನ ಪುನಶ್ಚೇತನಗೊಳಿಸಿ
ಮೊಳೆಯಿಸಿದ ಅಂಕುರ
ಚಿಗುರಿ 
ಎಲೆ ಬಿರಿದು
ಮೊಗ್ಗಾಗಿ
ಪಲ್ಲವಿಸಿದ ಸದ್ದಿಗೆ
ಸಂಭ್ರಮಿಸಿತ್ತು ಶ್ರಾವಣ! 

No comments:

Post a Comment