Sunday, August 4, 2013

ಸೆರೆ ಹಿಡಿದ ಕವಿತೆ




ಕಾಲಘಟ್ಟದ ಕ್ಷಣವೊಂದರ ಮೇಲೆ ಕೂತ ಕವಿತೆಯನ್ನು
ಪಾತರಗಿತ್ತಿಯ ಜಾಲದಲ್ಲಿ ಸೆರೆ ಹಿಡಿದು
ನಂತೆರ   ಕತ್ತರಿಸಿ
ಆಲ್ಬಮ್ಮಿನಲ್ಲಿ ಜೋಡಿಸಿಡುತ್ತಾ ಹೋಗುವುದು
ಅನ್ಯಾಯವಲ್ಲದೇ ಮತ್ತಿನ್ನೇನು?

ಕ್ಷಣಗಳು ಕಾಗದದ ಮೇಲೆ ಬಿದ್ದು ಮಮ್ಮಿಗಳಾದರೂ
ಕೊನೆಗೆ ಕವಿತೆಯ ರಂಗು ಮಾತ್ರ ಬೆರಳತುದಿಗಳ ಮೇಲೆ ಉಳಿದುಕೊಳ್ಳುತ್ತದೆ


-ಗುಲ್ಜಾರ್ ಹಿಂದಿಯಲ್ಲಿ ಸೆರೆ ಹಿಡಿದ ಕವಿತೆಯನ್ನು ಕನ್ನಡಕ್ಕೆ ತಂದಿದ್ದು!

[poem- Lamho par baithi najmon ko]

No comments:

Post a Comment