ಕಲ್ಪನೆಯೊಂದನ್ನು ಹಾಳೆಯಲ್ಲಿ ಹೂತಿಟ್ಟ ಕ್ಷಣ
ಕವಿತೆಯೊಂದು ಕಣ್ಣು ಬಿಟ್ಟು ನೋಡಿತ್ತು
ಒಂದು ರಾಶಿ ಶಬ್ಧಗಳ ಅಡಿಯಲ್ಲಿ ಸಿಲುಕಿಕೊಂಡಿತ್ತು ಕಲ್ಪನೆ
ಬೆದರಿದಂತಿದ್ದ ಮೆಲುದನಿಯೊಂದರ
ಆ...........ವಿಯೆದ್ದು ಕಿವಿಗಳನ್ನು ಸೋಕಿತ್ತು
ಯಾಕೆ ಇಷ್ಟೊಂದು ಶಬ್ಧಗಳಲ್ಲಿ ನನ್ನನ್ನು ರೂಪಿಸುತ್ತೀಯೆ
ಕವಿತೆಯ ಸಾಲುಗಳ ತೋಳನ್ನು ಎಳೆದು ಕಟ್ಟದ್ದೀಯೆ
ಉಪಮೆಗಳ ಪರದೆಯಲ್ಲಿ ನನ್ನ ಪ್ರತಿ ಚಲನೆಯನ್ನೂ ಮಡಿಕೆ ಮಾಡಿಡುತ್ತೀಯೆ
ಇಷ್ಟೊಂದು ಇಟ್ಟಿಗೆಗಳು ಬೇಕೆ ಒಂದು ಕಲ್ಪನೆಯನ್ನು ಹೂತಿಡಲು?!
ಗುಲ್ಜಾರ್ ಅವರ ಮತ್ತೊಂದು ಕವನ.
ಹಿಂದಿಯಿಂದ ಕನ್ನಡಕ್ಕೆ ತಂದೆ.
ek khyaal ko kagaj par dafnaaya to...