Showing posts with label ಕವನ. Show all posts
Showing posts with label ಕವನ. Show all posts

Monday, August 5, 2013

ಕಲ್ಪನೆಯೊಂದನ್ನು ಹಾಳೆಯಲ್ಲಿ ಹೂತಿಟ್ಟರೆ...



ಕಲ್ಪನೆಯೊಂದನ್ನು ಹಾಳೆಯಲ್ಲಿ ಹೂತಿಟ್ಟ ಕ್ಷಣ
ಕವಿತೆಯೊಂದು ಕಣ್ಣು ಬಿಟ್ಟು ನೋಡಿತ್ತು

ಒಂದು ರಾಶಿ ಶಬ್ಧಗಳ ಅಡಿಯಲ್ಲಿ  ಸಿಲುಕಿಕೊಂಡಿತ್ತು ಕಲ್ಪನೆ

ಬೆದರಿದಂತಿದ್ದ ಮೆಲುದನಿಯೊಂದರ
ಆ...........ವಿಯೆದ್ದು ಕಿವಿಗಳನ್ನು ಸೋಕಿತ್ತು
ಯಾಕೆ ಇಷ್ಟೊಂದು ಶಬ್ಧಗಳಲ್ಲಿ ನನ್ನನ್ನು ರೂಪಿಸುತ್ತೀಯೆ
ಕವಿತೆಯ ಸಾಲುಗಳ ತೋಳನ್ನು ಎಳೆದು ಕಟ್ಟದ್ದೀಯೆ
ಉಪಮೆಗಳ ಪರದೆಯಲ್ಲಿ ನನ್ನ ಪ್ರತಿ ಚಲನೆಯನ್ನೂ ಮಡಿಕೆ ಮಾಡಿಡುತ್ತೀಯೆ

ಇಷ್ಟೊಂದು ಇಟ್ಟಿಗೆಗಳು ಬೇಕೆ ಒಂದು ಕಲ್ಪನೆಯನ್ನು ಹೂತಿಡಲು?!




      ಗುಲ್ಜಾರ್ ಅವರ ಮತ್ತೊಂದು ಕವನ.
      ಹಿಂದಿಯಿಂದ ಕನ್ನಡಕ್ಕೆ ತಂದೆ.
      ek khyaal ko kagaj par dafnaaya to...









Sunday, August 4, 2013

ಸೆರೆ ಹಿಡಿದ ಕವಿತೆ




ಕಾಲಘಟ್ಟದ ಕ್ಷಣವೊಂದರ ಮೇಲೆ ಕೂತ ಕವಿತೆಯನ್ನು
ಪಾತರಗಿತ್ತಿಯ ಜಾಲದಲ್ಲಿ ಸೆರೆ ಹಿಡಿದು
ನಂತೆರ   ಕತ್ತರಿಸಿ
ಆಲ್ಬಮ್ಮಿನಲ್ಲಿ ಜೋಡಿಸಿಡುತ್ತಾ ಹೋಗುವುದು
ಅನ್ಯಾಯವಲ್ಲದೇ ಮತ್ತಿನ್ನೇನು?

ಕ್ಷಣಗಳು ಕಾಗದದ ಮೇಲೆ ಬಿದ್ದು ಮಮ್ಮಿಗಳಾದರೂ
ಕೊನೆಗೆ ಕವಿತೆಯ ರಂಗು ಮಾತ್ರ ಬೆರಳತುದಿಗಳ ಮೇಲೆ ಉಳಿದುಕೊಳ್ಳುತ್ತದೆ


-ಗುಲ್ಜಾರ್ ಹಿಂದಿಯಲ್ಲಿ ಸೆರೆ ಹಿಡಿದ ಕವಿತೆಯನ್ನು ಕನ್ನಡಕ್ಕೆ ತಂದಿದ್ದು!

[poem- Lamho par baithi najmon ko]

Wednesday, March 27, 2013

ಮಾಯದೋಕುಳಿ

ತಿಳಿ ನೀರ ಕೊಳದೊಳಗೆ
ನಸು ಕೋಪದಿಂದ ಮಿಸುಕಿದ್ದ
ಚಂದಿರನ ಕಣ್ಣುಗಳಲ್ಲಿ ಕೆಂಡದೋಕುಳಿ

ತಿಳಿಗಡಲ ಅಲೆಯೊಳಗೆ 
ಮೆಲ್ಲುಸಿರ ಲಯದಂತೆ ಅವಿತಿದ್ದ 
ಕಾಲನ ನೊರೆಯಲ್ಲಿ ಮಾಯದೋಕುಳಿ


ಇಳಿಬಿಟ್ಟ ಸೆರಗು ಸರಿದದ್ದ ಲೆಕ್ಕಿಸದೆ
ಧಾವಿಸಿದ ಚಕೋರಿಯ 
ಕಾಲ್ದನಿಯ ಕಿಣಿ ಕಿಣಿಯಲ್ಲಿ ಲಜ್ಜೆಯೋಕುಳಿ

ಕಮಲದೆಲೆಯೊಳಗಿಂದ 
ಇಣು ಇಣಿಕಿ ನೋಡಿದ್ದ ಚಂದಿರನ 
ಬಿಂಬಾಧರಗಳ ಮೇಲೀಗ ನಗುವಿನೋಕುಳಿ

ಮತ್ತು...
ಕೊಳದ ತಿಳಿಯೊಳಗೀಗ ರಂಗಿನೋಕುಳಿ!